ಕೆ.ಮಂಜು ಸಿನಿಮಾಸ್ ಲಾಂಛನದಲ್ಲಿ ಕೆ.ಮಂಜು ಅವರು ನಿರ್ಮಿಸುತ್ತಿರುವ ‘ದಿಲ್ರಂಗೀಲಾ ಚಿತ್ರಕ್ಕಾಗಿ ಅರ್ಜುನ್ ಅವರು ಬರೆದಿರುವ ‘೩೦, ೬೦, ೯೦ ಆಮೇಲೆ ಪಲ್ಟಿ ಗೇಟ್ ತೆಗಿದಿದ್ದರೂ ಕಾಂಪೌಂಡು ಹಾರ್ತೀನಿ ಡೋರೇ ತೆಗೆದಿದ್ದರೂ ಬೆಲ್ ಹೊಡಿತ್ತೀನಿ‘ ಎಂಬ ಹಾಡಿನ ಚಿತ್ರೀಕರಣ ನೆಲಮಂಗಲದಲ್ಲಿ ನಡೆದಿದೆ. ಮೂರು ದಿನಗಳ ಕಾಲ ನಡೆದ ಈ ಹಾಡಿನ ಚಿತ್ರೀಕರಣದಲ್ಲಿ ಗಣೇಶ್, ರಚಿತರಾಂ ಹಾಗೂ ನರ್ತಕರು ಭಾವಹಿಸಿದ್ದರು.
ಗೋಲ್ಡನ್ಸ್ಟಾರ್ ಗಣೇಶ್ ನಾಯಕರಾಗಿ ನಟಿಸುತ್ತಿರುವ ಈ ಚಿತ್ರವನ್ನು ಪ್ರೀತಂಗುಬ್ಬಿ ನಿರ್ದೇಶಿಸುತ್ತಿದ್ದಾರೆ. ರಚಿತರಾಂ, ಪ್ರಿಯಾಂಕರಾವ್, ದತ್ತಣ್ಣ, ರಂಗಾಯಣರಘು, ಅಚ್ಯುತಕುಮಾರ್, ಯಮುನ, ಶ್ರೀನಿಧಿ, ಗಿರಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ನಿರ್ದೇಶಕರೇ ಕಥೆ, ಚಿತ್ರಕಥೆ ಬರೆದಿರುವ ಈ ಚಿತ್ರಕ್ಕೆ ಎಚ್.ಸಿ.ವೇಣು ಅವರ ಛಾಯಾಗ್ರಹಣವಿದೆ. ಅರ್ಜುನ್ಜನ್ಯ ಸಂಗೀತ ನಿರ್ದೇಶನ, ದೀಪು.ಎಸ್.ಕುಮಾರ್ ಸಂಕಲನ, ಮುರಳಿ ನೃತ್ಯ ನಿರ್ದೇಶನ ಹಾಗೂ ಯೋಗಿ ಸಹನಿರ್ದೇಶನವಿರುವ ‘ದಿಲ್ರಂಗೀಲಾಕ್ಕೆ ಪ್ರಶಾಂತ್ ಸಂಭಾಷಣೆ ಬರೆದಿದ್ದಾರೆ. ಯೋಗರಾಜ್ಭಟ್, ಜಯಂತಕಾಯ್ಕಿಣಿ, ಅರ್ಜುನ್ ಗೀತರಚನೆ ಮಾಡಿದ್ದಾರೆ.